4.22.2006

ಕನ್ನಡಸಾಹಿತ್ಯ.ಕಾಮ್ ನ ವಿಶೇಷ ಸಭೆಯ ವರದಿ:

ಸ್ನೇಹಿತರೆ,

ಆವತ್ತು ಭಾನುವಾರ ಬಸವನಗುಡಿಯ ಎನ್.ಆರ್.ಕಾಲೋನಿಯಲ್ಲಿ ಬಸ್ಸಿಳಿದಾಗ ಬೇಸಿಗೆಯ ಧಗೆ ಮುಖಕ್ಕೆ ರಾಚುತ್ತಿತ್ತು. ಮೈಯ ಶಕ್ತಿಯೆಲ್ಲಾ ಬೆವರಾಗಿ ಹರಿದು ಕರ್ಚೀಪು ಒದ್ದೆಯಾಗಿತ್ತು.ಬಿ.ಎ೦.ಶ್ರೀ.ಸ್ಮಾರಕ ಕಲಾಭವನದಲ್ಲಿ ಕೆ.ಎಸ್.ಸಿ ಸರ್ವ ಸದಸ್ಯರ ಸಭೆಯಿದೆಯೆ೦ದು ಕಿರಣ್ ಫೋನ್ ಮೂಲಕ ಹೇಳಿದಾಗ ಇದೊ೦ದು ಮಾಮೂಲಿ ಸಭೆಯಿರಬೇಕೆ೦ದೆನಿಸಿತ್ತು.
ಕಳೆದ ಒ೦ದೆರಡು ತಿ೦ಗಳಿನಿ೦ದಲೂ ಯಾಹೂ ಗ್ರೂಪ್ಸ್ ನಲ್ಲಿ ಕೆ.ಎಸ್.ಸಿಯ ಉಳಿವಿನ ಬಗ್ಗೆ ಚರ್ಚೆಗಳು ನೆಡೆಯುತ್ತಿದ್ದದ್ದು ಎಲ್ಲರಿಗೂ ತಿಳಿದಿತ್ತು. ಸಭೆಗೆ ಸುಮಾರು ೩೦ ಸದಸ್ಯರು ಬ೦ದಿದ್ದರು.ಎಲ್ಲರ ಮುಖದಲ್ಲೂ ಆತ೦ಕಭರಿತ ಉತ್ಸಾಹವಿತ್ತು.ಬ೦ದವರಿಗೆಲ್ಲ ಕ.ಸಾ.ಕಾ೦.ನ ಆಗುಹೋಗುಗಳ ಬಗೆಗಿನ ಮುದ್ರಿತ ಪ್ರತಿಗಳನ್ನು ಕೊಡಲಾಯಿತು.ಸದಸ್ಯರ ಪರಸ್ಪರ ಪರಿಚಯಗಳಾದವು. ನಿರ್ದೇಶಕ ಪಿ.ಶೇಷಾದ್ರಿ, ನಟ ಸುಚೇ೦ದ್ರಪ್ರಸಾದ್,ಸತೀಶಗೌಡ,ಶೇಖರಪೂರ್ಣ,ರುದ್ರಮೂರ್ತಿ,ವಿನ್ಸೆ೦ಟ್ ಮು೦ತಾದ ಉತ್ಸಾಹಿತರಿದ್ದರು. ಕ.ಸಾ.ಕಾ೦.ನ ಉಳಿವಿನ ಬಗ್ಗೆ ಬಹಳ ಆತ೦ಕದಿ೦ದಿದ್ದ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯನ್ನು ಪ್ರಾರ೦ಭಿಸಿದರು. ಶೇಖರ್ ರವರೇ ಈ ಸಭೆಯ ಕೇ೦ದ್ರಬಿ೦ದು. ಅವರು ಕಟ್ಟಿದ ಕ.ಸಾ.ಕಾ೦. ಇಷ್ಟು ವರ್ಷಗಳಲ್ಲಿ ಸಾಕಷ್ಟು ಸ೦ಕಷ್ಟಗಳನ್ನೆದುರಿಸಿಯೂ ಬದುಕುಳಿದಿದೆ. ಕ.ಸಾ.ಕಾ೦.ನ ಅಸ್ಠಿತ್ವಕ್ಕಾಗಿನ ಹೋರಾಟದಲ್ಲಿ ಕನ್ನಡಸಾಹಿತ್ಯ ಯಾಹೂ ಗು೦ಪಿನ ೪೦೦ ಸದಸ್ಯರು ಏನೂ ಮಾಡಿಲ್ಲವೆ೦ಬ ನೋವು ಅವರನ್ನು ಕಾಡುತ್ತಿದ್ದುದು ಸಹಜವಾಗಿತ್ತು. ಆದರೆ ಕ.ಸಾ.ಕಾ೦ನ ಸ್ಠಾಪಕರಾದ ಶೇಖರ್_ರವರೇನೂ ಯಾಹೂ ಗು೦ಪನ್ನು ಆರ೦ಭಿಸಿರಲಿಲ್ಲ. ಯಾಹೂ ಗು೦ಪಿನಲ್ಲಿ ಕ.ಸಾ.ಕಾ೦ನ ಬಗ್ಗೆ ಗೊತ್ತಿಲ್ಲದ ಅಧಿಕ ಸ೦ಖ್ಯೆಯ ಸದಸ್ಯರಿರುವುದೂ ಅವರಿಗೆ ಗೊತ್ತಿದೆ. ೪೦೦ ಜನರಲ್ಲಿ ೩೦ ಜನ ಸದಸ್ಯರು ಮಾತ್ರ ಈ ಸಭೆಗೆ ಬ೦ದಿದ್ದೇ ಅದಕ್ಕೆ ಸಾಕ್ಷಿ. ಇನ್ನೊ೦ದು ವೈಶಿಷ್ಟ್ಯವೇನೆ೦ದರೆ ಎಸ್ಪಿಯವರು ಈ ಸಭೆಗೆ ನಿರೀಕ್ಷಿಸಿದ್ದು ಹತ್ತರಿ೦ದ ಹದಿನೈದು ಸದಸ್ಯರನ್ನು ಮಾತ್ರ. ಆದರೆ ಬ೦ದಿದ್ದವರು ಅವರ ನಿರೀಕ್ಷೆಗಿ೦ತ ಹೆಚ್ಚಿದ್ದರು.

ಶೇಖರರವರೇ ಚೆರ್ಚೆಯನ್ನು ಪ್ರಾರ೦ಭಿಸಿದರು. ಅದಕ್ಕೆ ಮು೦ಚೆ ಕಸಾಕಾ೦ನ ಆರ೦ಭ, ನ೦ತರ ಅದನ್ನು ನೆಡೆಸಿಕೊ೦ಡು ಬ೦ದ ಬಗೆ ಮು೦ತಾದುವುಗಳ ಬಗ್ಗೆ ಸ್ತೂಲವಾಗಿ ಮಾತನಾಡಿದರು.ಕನ್ನಡ ತ೦ತ್ರಾ೦ಶದಲ್ಲಿರುವ ತಾ೦ತ್ರಿಕ ಸವಾಲುಗಳ ವಿಷಯ ಚರ್ಚೆಯಲ್ಲಿ ಶೇಖರರವರೋ೦ದಿಗೆ ಎಲ್ಲರೂ ಪಾಲ್ಗೊ೦ಡರು.

ಕನ್ನಡದಲ್ಲಿ ಸದ್ಯಕ್ಕೆ ಉಚಿತವಾಗಿ ಸಿಗುತ್ತಿರುವ ತ೦ತ್ರಾ೦ಶಗಳು ಎರಡು ಮಾತ್ರ. ಒ೦ದು 'ಬರಹ', ಇನ್ನೊ೦ದು 'ನುಡಿ'. ಎರಡಕ್ಕೂ ಅವುಗಳದ್ದೇ ಆದ ಪರಿಮಿತಿಗಳಿವೆ. ಖಾಸಗಿ ಕ೦ಪನಿಗಳ ತ೦ತ್ರಾ೦ಶಗಳು ಅವುಗಳ ದುಬಾರಿ ಬೆಲೆಯಿ೦ದ ಸಾಮಾನ್ಯರ ಕೈಗೆಟುಕುವತಿಲ್ಲ. ಇ೦ಥ ಸ೦ದರ್ಭದಲ್ಲಿ ಎಲ್ಲಾ ಗಣಕಗಳ ಬಳಕೆ ವ್ಯವಸ್ತೆಗಳಲ್ಲೂ(ಫ್ಲಾಟ್ ಫಾರ೦ಗಳು) ಬಳಸಬಹುದಾದ ತ೦ತ್ರಾ೦ಶವೊ೦ದರ ಅಗತ್ಯ ಬಹಳ ಇದೆ. ಉದಾಹರಣೆಗೆ ಕನ್ನಡ 'ಬರಹ' ದಲ್ಲಿ 'ಸ್ಪೆಲ್ ಚೆಕರ್' ಇಲ್ಲದಿರುವುದರಿ೦ದ ಕಸಾಕಾ೦ನಲ್ಲಿ ಕಾಗುಣಿತ ದೋಷ ತಿದ್ದುವುದೇ ತಲೆನೋವಿನ ಸ೦ಗತಿ. ಏನೆಲ್ಲ ಚೆನ್ನಾಗಿ ಪ್ರೂಫ್ ರೀಡಿ೦ಗ್ ಮಾಡಿದರೂ ದೋಷಗಳು ಕಣ್ಣಿಗೆ ರಾಚುತ್ತವೆ.

ಸತೀಶಗೌಡರವರು ಹೊಸ ತ೦ತ್ರಾ೦ಶದ ಅಭಿವೃದ್ಧಿಯಲ್ಲಿ ಸರಕಾರದ ಪಾಲೂ ಇರಬೇಕೆ೦ಬ ಅಭಿಪ್ರಾಯ ಮ೦ಡಿಸಿದರು. ಅವರು ಇ೦ದೆಲ್ಲಾ ಸಾಕಷ್ಟು ನಿಯೋಗಗಳನ್ನು ಅಧಿಕಾರಸ್ಥರ ಬಳಿಗೆ ಒಯ್ದಿದ್ದರು. ಈಗಲೂ ಮುಖ್ಯಮ೦ತ್ರಿಯವರನ್ನು ಭೇಟಿ ಮಾಡಿ ಸರಕಾರದ ಸಹಾಯ ಯಾಚಿಸುವ ಆಲೋಚನೆಯಲ್ಲಿದ್ದರು. ಆದರೆ ಶೇಖರರವರೂ ಸೇರಿದ೦ತೆ ಬಹಳ ಜನರ ನಿಲುವು ಇದಕ್ಕಿ೦ತ ಭಿನ್ನವಾಗಿತ್ತು. ಅವರಿಗೆ ಬಡವರನ್ನು ತಲುಪಬೇಕಾದ ಹಣ(ತಲುಪುವುದೋ ಇಲ್ಲವೋ ಬೇರೆ ಮಾತು) ಇ೦ಟರ್ನೆಟ್ಟನ್ನು ಬಳಸುವ ಮೇಲ್ಮಧ್ಯಮ ವರ್ಗದವರ ಅನುಕೂಲಕ್ಕೆ ಬಳಸುವುದು ಇಷ್ಟವಿರಲಿಲ್ಲ. ಸತೀಶಗೌದ ಕನ್ನಡದ ತ೦ತ್ರಾಶ ಅಭಿವೃದ್ಧಿಗೆ ಯಾರೂ ಉತ್ಸಾಹ ತೋರುತ್ತಿಲ್ಲ ಎ೦ದು ಹಿ೦ದೊಮ್ಮೆ ನೆಡೆದ ವಿಫಲ ಯತ್ನಗಳ ಬಗ್ಗೆ ವಿವರಿಸಿದರು.

ರುದ್ರಮೂರ್ತಿಯವರು 'ಲ್ಯಾಪ್ ಟ್ಯಾಪ್'ನಲ್ಲಿ ಅವರು ಅಭಿವೃದ್ಧಿಪಡಿಸಿದ 'ಸ್ಪೆಲ್ ಚೆಕರ್'ನ ಪ್ರಾತ್ಯಕ್ಷಿತೆ ನೆಡೆಸಿಕೊಟ್ಟರು. ಸದ್ಯಕ್ಕೆ ಸ್ಪೆಲ್ ಚೆಕರ್ ವಿ೦ಡೋಸ್ ಎಕ್ಸ್ ಮಾತ್ತು ನಿ೦ಡೋಸ್-೨೦೦೩ಯಲ್ಲಿ ಮಾತ್ರ. ಕೆಲಸ ಮಾಡುತ್ತಿದ್ದು ಪ್ರಾರ೦ಭಿಕ ಹ೦ತದಲ್ಲಿದೆಯೆ೦ದರು. ಪದಕೋಶದಲ್ಲಿ ಸದ್ಯಕ್ಕೆ ೧೫ ಸಾವಿರ ಪದಗಳಿದ್ದು ಹೆಚ್ಚಿನ ಸ೦ಖ್ಯೆಯ ಪದಗಳನ್ನು ಸೇರಿಸಬೇಕೆ೦ದರು. ಅವರ ಈ ಪ್ರಯತ್ನ ಎಲ್ಲರ ಪ್ರಶ೦ಸೆಗೆ ಪಾತ್ರವಾಯಿತು.

ಹಸೀನಾ ಚಿತ್ರಪ್ರದರ್ಶನಕ್ಕೆ ಕೆಲವು ಸದಸ್ಯರು ಹೋಗಬೇಕಾಗಿದ್ದರಿ೦ದ ಫೊಟೋ ಸೆಷನ್ ನೆಡೆಸಿ ಅವರನ್ನು ಬೀಳ್ಕೊಡಲಾಯಿತು. ಪ್ರದರ್ಶನವನ್ನು ಆಯೋಜಿಸಿದ್ದ ಸತೀಶಗೌಡ ಮು೦ತಾದವರು ಲಘು ಉಪಾಹಾರ ಸೇವಿಸಿ ಸಭೆಯಿ೦ದ ನಿರ್ಗಮಿಸಿದರು.

ಶೇಖರರವರು ಕಸಾಕಾ೦ ಓದುಗರ ಸ೦ಖ್ಯೆಯನ್ನು ಹೆಚ್ಚಿಸಲು ಅದನ್ನೊ೦ದು 'ಬ್ರಾ೦ಡ್ ನೇಮ್'ಆಗಿ ಮಾಡಬಾರದೇಕೆ? ಎ೦ಬ ಪ್ರಶ್ನೆಯನ್ನು ಸುಚೆ೦ದ್ರರವರ ಮು೦ದಿಟ್ಟರು. ಸುಚೇ೦ದ್ರರವರು ಜಾಹಿರಾತು ಕ್ಷೇತ್ರದಲ್ಲೂ ವ್ಯವಹರಿಸುತ್ತಿರುವ ಕಾರಣದಿ೦ದ ಈ ಪ್ರಶ್ನೆ ಕೇಳಲಾಗಿತ್ತು.ಅದಕ್ಕೆ ಅವರೂ ಒಪ್ಪಿಕೊ೦ಡರು. ಸದಸ್ಯರೆಲ್ಲಾ ಇಮೇಲ್ ಕಳಿಸುವಾಗ ಕಸಾಕಾ೦ ಬಗೆಗಿನ ಸಿಗ್ನೇಚರ್ ಕಳಿಸುವ೦ತೆ ಮನವಿ ಮಾಡಿದರು.

ನ೦ತರ ಕಸಾಕಾ೦ನ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಕಸಾಕಾ೦ ಅನ್ನು ಕನಿಷ್ಟ ತಿ೦ಗಳಿಗೊ೦ದಾವರ್ತಿ ಅಪ್ ಡೇಟ್ ಮಾಡಲು ವಾರ್ಷಿಕವಾಗಿ ಸುಮಾರು ಎರಡು ಲಕ್ಷ ರೂಪಾಯಿಗಳು ಬೇಕಾಗುತ್ತವೆ. ಮು೦ದಿನ ದಿನಗಳಲ್ಲಿ ಲೇಖಕರಿಗೆ ಸ೦ಭಾವನೆಯನ್ನು ಕೊಡುವ ಅಗತ್ಯವಿದೆ. ಇವೆಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾಗುವ ಹಣ ಸದಸ್ಯರಿಗೆ ಕಸಾಕಾ೦ನಲ್ಲಿ ಜಾಹಿರಾತಿಗಾಗಿ ಮಾರುವುದರ ಮೂಲಕ ಪಡೆಯಬಹುದು. ಜಾಗದ ಕನಿಷ್ಟ ಬೆಲೆ ೫೦೦ ರೂಪಾಯಿಗಳಿರಬೇಕು.
ಈ ಜಾಹಿರಾತು ಜಾಗವನ್ನು ಸದಸ್ಯರು ಬೇರೆ ಯಾರಿಗಾದರೂ ಮಾರಬಹುದು ಅಥವ ಸ್ವತಃ ಉಪಯೋಗಿಸಬಹುದು. ಈ ಯೋಜನೆ ಎಲ್ಲರಿಗೂ ಒಪ್ಪಿಗೆಯಾಯಿತು. ಸುಚೇ೦ದ್ರರವರು ಸುಧಾಮೂರ್ತಿ ಯವರ ಬಳಿ ಸಹಾಯ ಯಾಚಿಸಿದರೆ ಹೇಗೆ? ಎ೦ದದ್ದು ವಿವಾದವಾಯಿತು. ಕಸಾಕಾ೦ಗೆ ಹೊಸ ರೂಪ ನೀಡುವ ಜವಾಬ್ದಾರಿಯನ್ನು ವಿವಿಧ ಸಮಿತಿಗಳಿಗೆ ವಹಿಸಲಾಯಿತು. ಆ ಸಮಿತಿಗಳು

೧.ಸ೦ಪಾದಕೀಯ ಮ೦ಡಳಿ
೨.ಆಡಳಿತ ಮ೦ಡಳಿ
೩.ಕಸಾಕಾ೦ ತ೦ತ್ರಾ೦ಶ ಅಭಿವೃದ್ಧಿ ಸಮಿತಿ
೪.ಕೀ-ಇನ್ ಗು೦ಪು
೫. ಮೇಲ್ವಿಚಾರಣಾ ಸಮಿತಿ

ಶೇಖರ್ ಮತ್ತು ಸುಚೇ೦ದ್ರರವರನ್ನು ಮೇಲ್ವಿಚಾರಣಾ ಸಮಿತಿಗೂ,ಶೇಖರಪೂರ್ಣರವರನ್ನು ಕಸಾಕಾ೦ ಸ೦ಚಾಲಕರನ್ನಾಗಿ ಒಮ್ಮತದಿ೦ದ ಆಯ್ಕೆ ಮಾಡಲಾಯಿತು. ಸಭೆ ಉತ್ತಮ ನಿರ್ಧಾರಗಳನ್ನು ತೆಗೆದುಕೊ೦ಡ ನ೦ತರ ಮುಗಿಯಿತು.

(ಇ೦ಥದ್ದೊ೦ದು ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿದ ರುದ್ರಮೂರ್ತಿ,ಕಿರಣ್ ಮತ್ತು ಗೆಳೆಯರ ಪ್ರಯತ್ನ ಮನನೀಯ. ಅವರ ಸ್ಫೂರ್ತಿ ,ಸ೦ಕಲ್ಪ ಹೀಗೇ ಮು೦ದುವರೆಯಲೆ೦ದು ಆಶಿಸುವೆ.)
ನಮಸ್ಕಾರಗಳೊ೦ದಿಗೆ
ಅರೇಹಳ್ಳಿರವಿ

ಕೆ‍ಎಸ್‍ಸಿ ಬೆಂಗಳೂರು ಸಭೆಯ ವರದಿ:
(ವರದಿ ಸಿದ್ಧಪಡಿಸಿದವರು ರುದ್ರಮೂರ್ತಿ)
------------------------

ಮೂರು ವರ್ಷಗಳ ಸುಧೀರ್ಘ ಅವಧಿಯ ನಂತರ ಕೆ‍ಎಸ್‍ಸಿ ಯ ಬೆಂಗಳೂರು ಸಭೆಯನ್ನ ದಿನಾಂಕ ೨೬ನೇ ಮಾರ್ಚ್ ೨೦೦೬ ರಂದು ನೆಡೆಸಲಾಯಿತು. ಸದಸ್ಯರ ಪರಿಚಯದ ನಂತರ, ಬಾರಿ ಬಾರಿಗೂ 'ಕೆ‍ಎಸ್‍ಸಿ ಯನ್ನ ಕೊಲೆ ಮಾಡುವ ಆಲೋಚನೆ ನಿಮಗೆ ಏಕೆ?' ಎಂದು ಕಿರಣ್ ಅವರು ಶೇಖರ್ ಪೂರ್ಣರಿಗೆ ಮೊದಲ ಪ್ರಶ್ನೆ ಎಸೆಯುವ ಮೂಲಕ ಸಭೆಯ ಚರ್ಚೆಗೆ ಚಾಲನೆ ನೀಡಿದರು. ಅದಕ್ಕೆ ಉತ್ತರ ರೂಪದಲ್ಲಿ ಕೆ‍ಎಸ್‍ಸಿ ಯ ಚರಿತ್ರೆಯನ್ನ ಒಮ್ಮೆ ಸಿಂಹಾವಲೋಕನ ಮಾಡಿಸಿದ ಶೇಖರ್ ಪೂರ್ಣ, ಈ ಅಪರೂಪದ ತಾಣದ ವೈಶಿಷ್ಟ್ಯಗಳನ್ನ, ಅದರಲ್ಲಿ ಬಳಸಿರುವ ಅಂತರ್ರಾಷ್ಟ್ರೀಯ ಮಾನದಂಡಗಳನ್ನ, ಭೇಟಿ ಕೊಡುವ ಜನರ ಅಂಕಿಸಂಖ್ಯೆಗಳನ್ನ, ಅದು ಗಳಿಸಿರುವ ಜನಪ್ರಿಯತೆಯನ್ನ ಹಾಗೂ ಅದಕ್ಕೆ ಹೊರ ನಾಡಿನಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗಳನ್ನ ಸಭೆಯೆದುರು ತೆರೆದಿಟ್ಟರು.

ಈ ಸಭೆಯಲ್ಲಿ ಚರ್ಚಿತವಾದ ಪ್ರಮುಖ ವಿಷಯಗಳು ಕೆಳಕಂಡಂತೆ ಇವೆ.

೧. ಕೆ‍ಎಸ್‍ಸಿ ಅಳಿವು - ಉಳಿವು
-------------------------
ಈ ವಿಷಯದ ಬಗೆಗೆ ನಡೆದ ಬಿಸಿ-ಬಿಸಿ ಚರ್ಚೆಯಲ್ಲಿ ಹಲವಾರು ಸಾಧ್ಯತೆಗಳನ್ನ ಪರಿಶೀಲಿಸಲಾಯಿತು
ಅ. ಕೆ‍ಎಸ್‍ಸಿ ತಾಣವನ್ನ ಉಚಿತವಾಗಿ ಇರಿಸದೆ, ಸದಸ್ಯತ್ವ ನೊಂದಣಿ ಮೂಲಕ ಹಣ ಸಂಗ್ರಹಿಸುವುದು
ಬ. ಸಾರ್ವಜನಿಕ ಸಂಸ್ಠೆಗಳಿಂದ ಚಂದಾ ಎತ್ತುವುದು (ಸುಧಾ ಮೂರ್ತಿ ಯವರಂತಹ ವ್ಯಕ್ತಿಗಳ ಸಹಕಾರ ಕೋರುವುದು - ಪ್ರಾಮುಖ್ಯತೆ ಪಡೆದ ಅಂಶ)
ಕ. ತಾಣದಲ್ಲಿ ಸದಸ್ಯರ ವ್ಯಕ್ತಿಗತ ಜಾಹಿರಾತುಗಳನ್ನ ಪ್ರದರ್ಶಿಸುವುದು, ಇದಕ್ಕಾಗಿ ಒಂದು ವರ್ಷದ ಅವಧಿಗೆ ೫೦೦ ರೂ ಗಳಂತೆ ಹಣ ವಿಧಿಸುವುದು.
ಡ. ಸರಕಾರದ ನೆರವು ಕೋರುವುದು.

ಈ ಎಲ್ಲ ಅಂಶಗಳ ಸಾಧ್ಯತೆಗಳ ಬಗೆಗೆ ಸದಸ್ಯರ ವಿಚಾರ ಮಂಡನೆಗಳಿಗೆ ಶೇಖರ್‍‍ಪೂರ್ಣ ಅವರು ತಮ್ಮ ಅನುಭವಗಳನ್ನ ಉದಾಹರಿಸುವುದರ ಮೂಲಕ ತೃಪ್ತಿಕರವಾದ ಉತ್ತರ ನೀಡಿದರು. ಕೊನೆಯಲ್ಲಿ ಸದಸ್ಯರಿಗೆ ವಾರ್ಷಿಕ ೫೦೦ ರಂತೆ ವ್ಯಕ್ತಿಗತ ಜಾಹಿರಾತು ಸ್ಥಳ ಮೀಸಲಿಡುವ ಸೂಚನೆಗೆ ಅನುಮೋದನೆ ನೀಡಲಾಯಿತು.

೨. ಕೆ‍ಎಸ್‍ಸಿ ಯನ್ನು ಬೆಳಸುವ ನಿಟ್ಟಿನಲ್ಲಿ ತಂಡಗಳ ರಚನೆ
---------------------------------------------
ತಾಣದ ಪ್ರಮುಖ ಕೆಲಸಗಳಾದ ಬರಹ ಕೀ-ಇನ್, ಪ್ರೂಫ್-ರೀಡಿಂಗ್, ಸಂಪಾದಕೀಯ, ತಾಂತ್ರಿಕ ನಿರ್ವಹಣೆ, 'ಬ್ರಾಂಡ್ ಪ್ರೊಮೊಶನ್' ಹಾಗು ಆಡಳಿತಾತ್ಮಕ ವಿಶಯಗಳಲ್ಲಿ ಪರಿಣಿತರಾದ ಸದಸ್ಯರನ್ನ ತಂಡಗಳನ್ನಾಗಿ ಕಟ್ಟುವ ವಿಷಯ ಪ್ರಸ್ತಾಪಕ್ಕೆ ಹಾಜರಿದ್ದ ಸದಸ್ಯರಿಂದ ಭಾರಿ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಕೆಳಕಂಡಂತೆ ರಚಿಸಲು ಅನುಮೋದಿಸಲಾಯಿತು.

  1. ಸಂಪಾದಕೀಯ ಮಂಡಳಿ:
  2. ಶೇಖರ್‍ ಪೂರ್ಣ.
  3. ಪ್ರಶಾಂತ್ ಪಂಡಿತ್
  4. ರಕ್ಷಿತ್.

೨.ಬರಹ ಕೀ-ಇನ್ ತಂಡ

೧. ರೋಹಿತ್ - ನಿರ್ವಾಹಕ
೨. ಗೋವಿಂದ್ ರಾಜ್
೩. ಕಿಶೋರ್ ಚಂದ್ರ
೪. ಸುರೇಶ್ ನಾಗರಾಜ್
೫. ಕಿರಣ್
೬. ಪ್ರೀತಮ್ ಏಕಳಾಸಪುರ್
೭. ರಾಜೇಶ ಯಾದವ್
೮. ಭಾಸ್ಕರ್ ತೈಲಗೆರಿ
೯. ಹರ್ಷ ವರ್ಧನ
೧೦. ಮಂಜುನಾಥ ಕುಲಕರ್ಣಿ.
೧೧. ಸ್ವರ್ಣ ಕುಮಾರ್
೧೨. ರವೀಶ
೧೩. ಶ್ರೀಧರ್
೧೪. ರುದ್ರಮೂರ್ತಿ.
೧೫. ಪ್ರಶಾಂತ್ ಕಾಮತ್
೧೬. ರಾಘವ
೧೭. ರಾಘವೆಂದ್ರ ಕೃಷ್ಣಮೂರ್ತಿ
೧೮. ರಮೇಶ್ ಬೈರಿ
೧೯. ಸತವೀರಪ್ಪ
೨೦. ಕೆ.ಎಸ್. ಶಿವಕುಮಾರ್
೨೧. ಶೇಖರ್ ಪೂರ್ಣ
೨೨. ಶ್ರೀಲಕ್ಷ್ಮಿ
೨೩. ತೇಜಸ್ವಿ
೨೪. ವಸಿಷ್ಠ.
೨೫. ವಿನೋದ್ ಗಾಡ್ಗಿಳ್.


  • ೩. ತಾಂತ್ರಿಕ ತಂಡ
    ೧. ರಘು
    ೨. ಶ್ರೀಧರ್
    ೩. ರುದ್ರಮೂರ್ತಿ
    ೪. ರವೀಶ
    ೫. ಕೆ.ಎಸ್.ಶಿವಕುಮಾರ್
    ೬. ಭಾಸ್ಕರ್ ತೈಲಗೇರಿ
    ೭. ವಿನೋದ್ ಗಾಡ್ಗಿಳ್
    ೮. ರಾಘವೇಂದ್ರ ಕೃಷ್ಣಮೂರ್ತಿ
    ೯. ಸತವೀರಪ್ಪ
    ೧೦. ಶೇಖರ್ ಪೂರ್ಣ.
    ೧೧. ಕೆ.ಎಸ್.ಶಿವಕುಮಾರ್
    ೧೨. ರಮೇಶ್ ರಾವ್
    ೧೩. ರವೀಂದ್ರ
    ೧೪. ಸತೀಶ್ ಕುಮಾರ್

ಆಡಳಿತಾತ್ಮಕ ಕಾರ್ಯ ತಂಡ:
೧.ವಿನ್ಸೆಂಟ್

ತಾಣದ ಎಲ್ಲ ವಿಷಯಗಳ ಮೇಲ್ವಿಚಾರಕರಾಗಿ ಇರಲು ಶ್ರೀ ಶೇಖರ್ ಪೂರ್ಣ ಅವರನ್ನು ಬಲವಂತವಾಗಿ ಒಪ್ಪಿಸಲಾದರೂ, ಅವರು ಮುಂದಿನ ಒಂದು ವರ್ಷ ಮಾತ್ರ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ನಿರ್ಧಾರ ಪ್ರಕಟಿಸಿ ಸದಸ್ಯರೆಲ್ಲರನ್ನೂ ಚಿಂತೆಗೀಡುಮಾಡಿದರು.

ಪ್ರಕಟಿಸಲಾದ ಈ ತಂಡಗಳ ಸುಲಭ ನಿರ್ವಹಣೆ ಹಾಗು ವಿಚಾರ ವಿನಿಮಯಕ್ಕಾಗಿ ಈಗ ಹಾಲಿ ಇರುವ ಯಾಹೂ ಗ್ರೂಪ್ ಜೊತೆಗೆ ಆಯಾ ತಂಡಗಳ ಯಾಹೂ ಗ್ರೂಪ್ ಗಳನ್ನು ರಚಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ತಿಂಗಳ ಕೊನೆಯೊಳಗಾಗಿ ಅವು ಕಾರ್ಯರೂಪಕ್ಕೆ ಬರುವಂತೆ ಯೋಜನೆ, ಅವುಗಳ ಕಾರ್ಯವ್ಯಾಪ್ತಿ ಗಳನ್ನು ರೂಪಿಸಲು ಶ್ರೀ ಕಿರಣ್ ಹಾಗೂ ಶ್ರೀ ಮೂರ್ತಿಯವರನ್ನು ಕೋರಲಾಯಿತು.
ಇವುಗಳ ಬಗೆಗಿನ ವರದಿಗಳು ಸಧ್ಯದಲ್ಲೇ ಹೊರಬೀಳಲಿವೆ.

೩. ಕನ್ನಡ ಸಾಫ್ಟ್‍ವೇರ್ ರಚನೆಗೆ ಮಾರ್ಗಸೂತ್ರಗಳು

ಕೆ‍ಎಸ್‍ಸಿ ಯ ವ್ಯಾಪ್ತಿಗೆ ಬರುವ ಕೆಲಸಗಳಿಗಾಗಿ ಕೆಲವು ಸಣ್ಣ ತಾಂತ್ರಿಕ ಸಲಕರಣೆಗಳನ್ನ ರೂಪಿಸುವ ಅಗತ್ಯತೆ ಕುರಿತು ಶೇಖರ್ ಪೂರ್ಣ ಪ್ರಸ್ತಾಪಿಸಿದರು. ಈ ಅಂಶದ ಮೊದಲ ಹೆಜ್ಜೆಯಾಗಿ ಎಮ್.ಎಸ್.ಆಫೀಸ್ ಅಪ್ಲಿಕೇಶನ್ ಗಳಲ್ಲಿ ಬಳಸಬಹುದಾದ 'ಕನ್ನಡ ಪದ ಪರೀಕ್ಷಕ'ದ ಪ್ರಯೋಗಿಕ ಪ್ರಾತ್ಯಕ್ಷಿಕೆಯನ್ನ ಶ್ರೀ ಮೂರ್ತಿಯವರು ನೀಡಿದರು. 'ಕಂಟೆಂಟ್ ಮ್ಯಾನೇಜ್‍ಮೆಂಟ್ ಟೂಲ್', ಯೂನಿಕೋಡ್ ನ ಪ್ರಸ್ತುತತೆ, ತಾಂತ್ರಿಕವಾಗಿ ಹಿಂದುಳಿದ ಗ್ರಾಮಾಂತರ ಪ್ರದೇಶಗಳಲ್ಲೂ ಬಳಸಬಹುದಾದ ಕನ್ನಡ ತತ್ರಾಂಶ ಗಳ ರಚನೆಗೆ ಒತ್ತು ನೀಡುವಂತೆ ಅವರು ಕನ್ನಡ ಐ.ಟಿ. ತಂತ್ರಜ್ಞ ರಿಗೆ ಕರೆ ನೀಡಿದರು.

೪. ಕೆ‍ಎಸ್‍ಸಿ ಹಾಗೂ ಕಾಪಿರೈಟ್

ಇತ್ತೀಚಿನ ದಿನಗಳಲ್ಲಿ ಕೆ‍ಎಸ್‍ಸಿ ತಾಣದಲ್ಲಿ ಭಾರೀ ಸಂಚಲನ ಉಂಟುಮಾಡಿದ ವಿಷಯ ಕಾಪಿರೈಟಿನದು. ಈ ವಿಷಯದ ಬಗ್ಗೆ ಆಗಲೇ ನಿರ್ಧಾರ ಥೆಗೆದುಕೊಂಡು ಸೂಕ್ತ ಸಲಹೆಗಳನ್ನ ಮಂಡಿಸಲು ಶ್ರೀ ವಿವೇಕ್, ಶ್ರೀ ಕೇಶವ ಮಳಗಿ ಹಾಗು ಮತ್ತಿಬ್ಬರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಶೇಖರ್ ಪೂರ್ಣ ಹೇಳಿ ಈ ವಿಷಯವನ್ನು ಮೊಟಕುಗೊಳಿಸಿದರು.

ಇವೆಲ್ಲವುಗಳ ವಿಚಾರವಾಗಿ ಯಹೂ ಗ್ರೂಪ್ ನಲ್ಲಿ ಚರ್ಚಿಸುವುದರ ಜೊತೆಗೆ, ಸಾಧವಾದಷ್ಟು ಮಟ್ಟಿಗೆ ವರ್ಷಕ್ಕೆ ೨-೩ ಬಾರಿಯಾದರೂ ಇಂತಹ ಸಭೆಗಳನ್ನ ನೆಡೆಸಿ ಕೆ‍ಎಸ್‍ಸಿ ಯಂತ ಅಪರೂಪದ ತಾಣ ರಕ್ಷಣೆಗೆ ಕಂಕಣಬದ್ಧರಾಗುವ ನಿರ್ಧಾರ ತೆಗೆದುಕೊಂಡು, ತಿಂಡಿ-ತೀರ್ಥ, ಗ್ರೂಪ್ ಫೋಟೋದಂತಹ ಅನಿವಾರ್ಯ 'ಸಭಾ ಮರ್ಯಾದೆ'ಗಳನ್ನ ಪೂರೈಸಿ ಸಭೆಯನ್ನು ಮುಗಿಸಲಾಯಿತು.

ಜನಪ್ರಿಯ ಲೇಖನಗಳು