9.07.2006
ಕನ್ನಡಸಾಹಿತ್ಯ.ಕಾಂ ಬಳಗದ ಹೊಸ ಕನಸು......!
ಕನ್ನಡಸಾಹಿತ್ಯ.ಕಾಂ ಸಾಮೂಹಿಕ ಚಟುವಟಿಕೆಯಾಗುವ ನಿಟ್ಟಿನಲ್ಲಿ ಕಳೆದ ತಿಂಗಳು ನೆಡೆದ ಸಂಪೂರ್ಣ ಮತ್ತು ಪದಪರೀಕ್ಷಕ ಬಿಡುಗಡೆ ಸಮಾರಂಭ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್ಲಿ ಹೊಸ ಹುರುಪೊಂದನ್ನು ಸೃಷ್ಟಿಸಿದೆ. ಹುರುಪು ಕ್ಷಣಿಕವಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲೂ ಇದ್ದೇ ಇದೆ. ಕಳೆದ ಸಮಾರಂಭದ ಆಯೋಜನೆಯ ಮುಂಚೂಣಿಯಲ್ಲಿದ್ದ
೧.ಕಿರಣ್
೨.ವಸಿಷ್ಠ
೩.ಕಿಶೋರ್ಚಂದ್ರ
೪.ಅರೇಹಳ್ಳಿ ರವಿ
೫.ಶ್ರೀಧರ್ ಸಾಹುಕಾರ್
ಶೇಖರರವರ ಮನೆಯಲ್ಲಿ ಅನೌಪಚಾರಿಕವಾಗಿ ದಿನಾಂಕ: ೦೩-೦೯-೨೦೦೬ರ ಭಾನುವಾರ ಬೆಳಿಗ್ಗೆ ಸೇರಿದ್ದರು.
ಚರ್ಚೆ-ಮಾತುಕತೆಗಳಲ್ಲಿ ಮುಂದಿನ ಚಟುವಟಿಕೆಗಳ ಬಗೆಗಿನ ಸ್ಥೂಲ ಕಲ್ಪನೆ ಮತ್ತು ಆಶಯ ಗೋಚರವಾಗತೊಡಗಿತು. ಮಾರ್ಚ್ ೨೮, ೨೦೦೭ಕ್ಕೆ ಕನ್ನಡಸಾಹಿತ್ಯ.ಕಾಂ ೬ನೇ ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತದೆ.
ಅಂತರ್ಜಾಲದಲ್ಲಿ ಕನ್ನಡದ ಸಾಂಸ್ಕೃತಿಕ ನೆಲೆಯಾಗಿ-ತಾಂತ್ರಿಕವಾದ ಅಗತ್ಯಗಳನ್ನೂ ವ್ಯಾಖ್ಯಾನಿಸತೊಡಗಿರುವ ಕನ್ನಡಸಾಹಿತ್ಯ.ಕಾಂ , ಬೆಂಗಳೂರಿನ ಬಳಗ ಹಾಗೂ ಎಲ್ಲಾ ಬೆಂಬಲಿಗರ ಬಳಗದ ಪರವಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವೊಂದನ್ನು ಆಯೋಜಿಸಬೇಕು ಎಂಬ ಚಟುವಟಿಕೆಯ ಕಲ್ಪನೆಯನ್ನು ಎಲ್ಲಾ ಸದಸ್ಯರ ಮುಂದೆ ಪ್ರಸ್ತಾವನೆಯಾಗಿ ಇಡುತ್ತಿದ್ದೇವೆ.
ಈ ವಿಚಾರ ಸಂಕಿರಣದ ಭಾಗವಾಗಿ ಕನ್ನಡಸಾಹಿತ್ಯ.ಕಾಂನ ಎಲ್ಲ ಲೇಖಕರನ್ನು ವಿಚಾರಸಂಕಿರಣದ ದಿನವಾದ ಏಪ್ರಿಲ್ ೧೫, ೨೦೦೭ರ ಸಂಜೆ, ಕೃತಜ್ಞತೆ ಸಲ್ಲಿಸುವ ಸಲುವಾಗಿ ಒಂದೆಡೆ ಸೇರಿಸುವ ಉದ್ದೇಶವೂ ಇದೆ.
ಪ್ರಸ್ತಾವನೆಯ ತಾರ್ಕಿಕ ಬೆಳವಣಿಗೆಯಾಗಿ ಈ ಕೆಳಕಂಡ ಸಮಿತಿಗಳನ್ನು ರಚಿಸಲಾಗಿದೆ.
೧. ಮಾಹಿತಿ ತಂತ್ರಜ್ಞಾನದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯಾತಿಗಣ್ಯರನ್ನು ಪ್ರಬಂಧ ಮಂಡನೆಗಾಗಿ ಗುರುತಿಸಿ, ಸಂಪರ್ಕಿಸುವ ಸಲುವಾಗಿನ ಸಮಿತಿಯ ನೇತೃತ್ವ ಶೇಖರ್ಪೂರ್ಣ.
೨. ಕನ್ನಡಸಾಹಿತ್ಯ.ಕಾಂನ ಲೇಖಕರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಕರೆತರಲು, ಅವರ ಆತಿಥ್ಯ ವಹಿಸುವ ಸಲುವಾಗಿನ ಸಮಿತಿಯ ನೇತೃತ್ವ ಶ್ರೀಧರ್ ಸಾಹುಕಾರ್.
೩. ಸ್ಮರಣ ಸಂಚಿಕೆ(ಕನ್ನಡಸಾಹಿತ್ಯ.ಕಾಂನ ಇತಿಹಾಸ, ಲೇಖಕರ ಅನಿಸಿಕೆಗಳು, ಪ್ರಬಂಧ ಮಂಡಿಸುವವರ ಪ್ರಬಂಧಗಳು, ಜಾಹೀರಾತುಗಳು)ಯ ಸಮಿತಿಯ ನೇತೃತ್ವ ವಸಿಷ್ಠ.
೪. ಕನ್ನಡಸಾಹಿತ್ಯ.ಕಾಂನ ಎಲ್ಲ ಬೆಂಬಲಿಗರ ಬಳಗಕ್ಕೆ ಒಂದೇ ತೆರನಾದ ನಿಗದಿತ ಮಟ್ಟಕ್ಕೆ ಬೇಕಾದ ಪರಿಕರಗಳು-letter head, logo, T-shirt with logo, dress code, media kit ಇತ್ಯಾದಿ ಪೂರೈಸುವಿಕೆಯ ನಿರ್ವಹಣೆಗಾಗಿನ ಸಮಿತಿಯ ನೇತೃತ್ವ ಕಿಶೋರ್ಚಂದ್ರ.
೫. ಮಾಧ್ಯಮ ಸಂಪರ್ಕಕ್ಕಾಗಿನ ಸಮಿತಿಯ ನೇತೃತ್ವ ರುದ್ರಮೂರ್ತಿ\ಅರೇಹಳ್ಳಿ ರವಿ
೬.ರಾಷ್ಟ್ರೀಯ ವಿಚಾರ ಸಂಕಿರಣದ ಅತಿಥಿಗಳ ಊಟೋಪಚಾರ ಇತ್ಯಾದಿ ಸೌಕರ್ಯಗಳಿಗಾಗಿನ ಸಮಿತಿಯ ನೇತೃತ್ವ ಗೋವಿಂದರಾಜು.
ಈ ವಿಚಾರ ಸಂಕಿರಣದ ಕಾರ್ಯಕ್ರಮ, ನೋಂದಾಯಿಸಿಕೊಂಡವರು ಮತ್ತು ವಿಶೇಷ ಆಹ್ವಾನಿತರಿಗೆ ಮಾತ್ರ. ಇದಕ್ಕೆ ಸಂಬಂಧಪಟ್ಟಂತೆ ನೋಂದಾವಣಿ ಶುಲ್ಕವನ್ನು ನಿಗದಿಗೊಳಿಸಬೇಕಾಗಿದೆ.
ಈ ಕುರಿತಂತೆ ಕಾರ್ಯಕ್ರಮದ ರೂಪುರೇಷೆಯಲ್ಲಿ ಕ್ರಿಯಾಶೀಲರಾಗಲು ಹೆಚ್ಚಿನ ಸದಸ್ಯರ\ಕಾರ್ಯಕರ್ತರ\ಸ್ವಯಂಸೇವಕರ ಅಗತ್ಯವೂ ಇದೆ.
ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ಕಳಿಸಬಹುದು .
ಬೆಂಗಳೂರು ಸುತ್ತಮುತ್ತಲಿರುವ ಕನ್ನಡಸಾಹಿತ್ಯ.ಕಾಂ ಸದಸ್ಯರು, ಈ ವಿಷಯವನ್ನು ವಿವರವಾಗಿ ಚರ್ಚಿಸಲು ಸಭೆಯೊಂದನ್ನು ಕರೆಯಲಾಗಿದೆ.
ಸಭೆಯಲ್ಲಿ ಮೇಲೆ ಕಾಣಿಸಿದ ಸಮಿತಿಯ ನೇತೃತ್ವ ವಹಿಸಿರುವವರಲ್ಲದೆ ಉಳಿದ ಸರ್ವ ಸದಸ್ಯರೂ ಸಹ ಪಾಲ್ಗೊಳ್ಳಬೇಕಾಗಿ ಮನವಿ.
ಸಭೆಯ ದಿನಾಂಕ: ೧೬-೦೯-೨೦೦೬ ಶನಿವಾರ ಸಂಜೆ ೬.೦೦
ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ
ಹಳೆ ಜಿಲ್ಲಾಧಿಕಾರಿ ಕಛೇರಿ ಆವರಣ
ಕೆಂಪೇಗೌಡ ರಸ್ತೆ
ಮೈಸೂರು ಬ್ಯಾಂಕ್ ವೃತ್ತದ ಬಳಿ
ಕಾವೇರಿ ಭವನದ ಪಕ್ಕ
ಬೆಂಗಳೂರು
ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿರುವ
ಕಿರಣ್
ನಿರ್ವಾಹಕ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ
ದೂ: ೯೮೪೫೬ ೯೬೫೬೫
ಜನಪ್ರಿಯ ಲೇಖನಗಳು
-
a meet with poet and kannada development authority chairman g.s.siddalingaiah about kannada supporting softwares, kannada utf fonts, tunga ...
-
ಕನ್ನಡಸಾಹಿತ್ಯ.ಕಾಂ ಗೆ ಆಗ ತಾನೆ ಒಂದು ಜಯ ದೊರಕಿತ್ತು. ಮೈಕ್ರೋಸಾಫ್ಟ್ನ 'ತುಂಗಾ' ಫಾಂಟ್ ವಿಚಾರದಲ್ಲಿ ಕನ್ನಡಸಾಹಿತ್ಯ.ಕಾಮ್ ನೆಡೆಸಿದ ಹೋರಾಟ, ಚರ್ಚೆಗಳು, ...
-
ಭಾನುವಾರ ಅಕ್ಟೋಬರ್ ೧. ಆಯುಧ ಪೂಜೆ ದಿವಸ, ಮೈಸೂರಿಗೆ ದಸರ ಸಂಭ್ರಮ. ಮೈಸೂರೆಂಬ ರಾಜನಗರಿ ನವ ವಧುವಂತೆ ಅಲಂಕಾರಗೊಂಡು ಮೈಮರೆತಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಹಬ್ಬ...
-
ಕನ್ನಡಸಾಹಿತ್ಯಡಾಟ್ಕಾಂ ಸಲ್ಲಿಸಲಿರುವ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿ...
-
ಗೆಳೆಯರೆ, "ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸ...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹ...
-
ಲೇಖಕರು: ಎಚ್.ಎಸ್. ಪ್ರಭಾಕರ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನರಾದ ಪ್ರಯುಕ್ತ ಸರ್ಕಾರ ಜ.೨೮ ರಿಂದ ಫೆ.೩ ರವರೆಗೆ ಒಂದು ವಾರ ಶೋಕಾಚರಣೆ ಪ್ರಕಟಿಸಿದ್ದು ಸರಿ...