10.23.2010
ಹಾಸನ ಸಕಲೇಶಪುರದಲ್ಲಿ ನವಿಲಾದವರು ಚಿತ್ರ-ಸಂವಾದ
ಸಂವಾದ ಡಾಟ್ ಕಾಂ(www.samvaada.com) ದೃಶ್ಯ ಮಾಧ್ಯಮಗಳಲ್ಲಿ ಅಕೆಡೆಮಿಕ್ ಅರಿವಿನ ಗುಣಮಟ್ಟದ ಪಠ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸದಭಿರುಚಿಯ ಚಿತ್ರ ಪ್ರದರ್ಶನ, ಸಂವಾದ, ಚಲನಚಿತ್ರ ಚಿಂತನ ಶಿಬಿರ ಇತ್ಯಾದಿಗಳನ್ನು ಆಯೋಜಿಸುತ್ತ ಬಂದಿದೆ. ಜೊತೆಗೆ ಈ ಎಲ್ಲಾ ಚಟುವಟಿಕೆಗಳನ್ನು ಅಂತರ್ಜಾಲ ತಾಣದಲ್ಲೂ ಲೇಖನ/ಪಠ್ಯ ರೂಪದಲ್ಲಿ ದಾಖಲಿಸುತ್ತಾ ಬಂದಿದೆ.
ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಕ್ವಾಂಟ, ಹಾಸನ ಜೊತೆಯಾಗಿ ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್ನಲ್ಲಿ ಏರ್ಪಡಿಸಿವೆ.
ಚಿತ್ರರಂಗದ ಇಂದಿನ ಸಂದರ್ಭದಲ್ಲಿ ನೂರು ಸಾವಿರ ಲಕ್ಷ ದಶಲಕ್ಷ ಕೋಟಿ ದಶಕೋಟಿ ಮತ್ತು ನೂರುಕೋಟಿ ಎನ್ನುವುದು ಸರಳ ಅಂಕೆಗಳಾಗಿಬಿಟ್ಟಿವೆ. ವ್ಯಕ್ತಿಯೊಡನೆಯೆ, ನೂರು ಸಾವಿರಗಳೂ ನಗಣ್ಯವಾಗಿಬಿಟ್ಟಿವೆ. ಹಾಸ್ಯಾಸ್ಪದವೂ ಆಗಿವೆ.
ಮೂವತ್ತೈದು ಸಾವಿರದ ದೃಶ್ಯಾಭಿವ್ಯಕ್ತಿಯನ್ನು ಹಾಸ್ಯಾಸ್ಪದ ಚಟುವಟಿಕೆ ಎನ್ನಬೇಕೆ? ಅಥವ ಕೆಟ್ಟ ವಿಜೃಂಭಣೆಯ, ಅನೈತಿಕ ಸಂಭಾವನೆ/ವೆಚ್ಚದ ವಿರುದ್ಧ ಎತ್ತಿರುವ ಅರ್ಥಪೂರ್ಣ ಪ್ರಶ್ನೆ ಎಂದೆನ್ನಬೇಕೆ? ಈ ಪ್ರಶ್ನೆಗಳನ್ನು ಹೆಚ್ಚು ಮಹತ್ವಪೂರ್ಣ ಚರ್ಚೆಗೆ ಒಡ್ಡುವ ಆಶಯವನ್ನು ಸಂವಾದ ಡಾಟ್ ಕಾಂ ಹೊಂದಿದೆ.
ಹಾಸನದಲ್ಲಿ ‘ನವಿಲಾದವರು’
ವಿವರಗಳು ಕೆಳಕಂಡಂತಿವೆ.
ದಿನಾಂಕ: ಅಕ್ಟೋಬರ್ 24, ಭಾನುವಾರ
ಸಮಯ: ಸಂಜೆ 6 ಕ್ಕೆ
ಸ್ಥಳ: ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್, ಹಾಸನ
ಸಂವಾದ ಮತ್ತು ಚರ್ಚೆಯಲ್ಲಿ ಭಾಗವಹಿಸುವವರು:
‘ನವಿಲಾದವರು’ ಚಿತ್ರತಂಡ
ಶೇಖರಪೂರ್ಣ, ಹಿರಿಯ ಚಿತ್ರ ವಿಮರ್ಶಕರು ಮತ್ತು ಸಂಪಾದಕರು ಕನ್ನಡಸಾಹಿತ್ಯ ಡಾಟ್ ಕಾಂ.
ವೆಂಕಟೇಶಮೂರ್ತಿ ಆರ್ ಪಿ(ಸಂಪಾದಕರು, ಜನತಾ ಮಾಧ್ಯಮ ದಿನಪತ್ರಿಕೆ)
ರೂಪ ಹಾಸನ
ಶ್ರೀಮತಿ ಭಾನು ಮುಷ್ತಾಕ್( ಲೇಖಕರು, ಇವರ ಕಥೆಗಳ ಆಧಾರಿತ ಹಲವು ಚಿತ್ರಗಳು ಪ್ರಶಸ್ತಿ ಗಳಿಸಿವೆ)
ಜೆ ಎಚ್ ನಾರಾಯಣ ಸ್ವಾಮಿ(ಜ ಹೋ ನಾ), ಲೇಖಕರು.
ಮಂಜುನಾಥ್(ಅಧ್ಯಕ್ಷರು, ಪ್ರೆಸ್ ಅಸೋಸಿಯೇಷನ್, ಹಾಸನ)
ಡಾ| ನರಹರಿ( ನಿವೃತ್ತ ಪ್ರಾಂಶುಪಾಲರು)
ಚಂದ್ರಶೇಖರ್ ಧೂಲೆಕರ್(ಕವಿ, ಲೇಖಕರು)
ಉದಯರವಿ (ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)
ಮದನ್ ಗೌಡ(ಮಾಜಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)
ಚಂದ್ರಶೇಖರ್ ಪೆಡಸೂರ್
ಡಾ| ಗೀತಾ ( ಪ್ರಾಂಶುಪಾಲರು, ಹಾಸನಾಂಬ ಬಿ ಎಡ್ ಕಾಲೇಜು)
ಸಕಲೇಶಪುರದಲ್ಲಿ ’ನವಿಲಾದವರು’
ವಿವರಗಳು ಕೆಳಕಂಡಂತಿವೆ.
ದಿನಾಂಕ: ಅಕ್ಟೋಬರ್ 25, ಸೋಮವಾರ
ಸಮಯ: ಸಮಯ : ಬೆಳಿಗ್ಗೆ 11ಕ್ಕೆ
ಸ್ಥಳ : ’ಮಕ್ಕಿ ತಿಟ್ಟ’ ಹೋಂ ಸ್ಟೇ, ದೊನ್ನಾಳಿ ಕಾಫಿ ಎಸ್ಟೇಟ್, ಸಕಲೇಶಪುರದ ಹತ್ತಿರ.
ಸಕಲೇಶಪುರದಲ್ಲಿ ಪ್ರದರ್ಶನ ಮತ್ತು ಸಂವಾದಕ್ಕೆ ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆಯಿದೆ
ಚಿತ್ರ ಪ್ರದರ್ಶನ ಮತ್ತು ಸಂವಾದಕ್ಕೆ ಭಾಗವಹಿಸುವವರು ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು:
99004 39930, 97317 55966
More Details on http://samvaada.com
ಧನ್ಯವಾದಗಳು,
10.11.2010
"Navilaadavaru" Film Screening and Discussion
ಜನಪ್ರಿಯ ಲೇಖನಗಳು
-
a meet with poet and kannada development authority chairman g.s.siddalingaiah about kannada supporting softwares, kannada utf fonts, tunga ...
-
ಕನ್ನಡಸಾಹಿತ್ಯ.ಕಾಂ ಗೆ ಆಗ ತಾನೆ ಒಂದು ಜಯ ದೊರಕಿತ್ತು. ಮೈಕ್ರೋಸಾಫ್ಟ್ನ 'ತುಂಗಾ' ಫಾಂಟ್ ವಿಚಾರದಲ್ಲಿ ಕನ್ನಡಸಾಹಿತ್ಯ.ಕಾಮ್ ನೆಡೆಸಿದ ಹೋರಾಟ, ಚರ್ಚೆಗಳು, ...
-
ಭಾನುವಾರ ಅಕ್ಟೋಬರ್ ೧. ಆಯುಧ ಪೂಜೆ ದಿವಸ, ಮೈಸೂರಿಗೆ ದಸರ ಸಂಭ್ರಮ. ಮೈಸೂರೆಂಬ ರಾಜನಗರಿ ನವ ವಧುವಂತೆ ಅಲಂಕಾರಗೊಂಡು ಮೈಮರೆತಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಹಬ್ಬ...
-
ಕನ್ನಡಸಾಹಿತ್ಯಡಾಟ್ಕಾಂ ಸಲ್ಲಿಸಲಿರುವ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿ...
-
ಗೆಳೆಯರೆ, "ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸ...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹ...
-
ಲೇಖಕರು: ಎಚ್.ಎಸ್. ಪ್ರಭಾಕರ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನರಾದ ಪ್ರಯುಕ್ತ ಸರ್ಕಾರ ಜ.೨೮ ರಿಂದ ಫೆ.೩ ರವರೆಗೆ ಒಂದು ವಾರ ಶೋಕಾಚರಣೆ ಪ್ರಕಟಿಸಿದ್ದು ಸರಿ...


