12.19.2006
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ
ಗೆಳೆಯರೆ,
"ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆಗೆತ್ತಿಕೊಂಡು, ಸಭೆಯು ಸರ್ವಾನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.
ನಂತರದ ಬೆಳವಣಿಗೆಯಲ್ಲಿ, ಬೆಂಗಳೂರಿನ 'ಕ್ರೈಸ್ಟ್ ಕಾಲೇಜ್ ಆಫ್ ಲಾ', ಇವರು ಈ ವಿಚಾರಸಂಕಿರಣದ ಸಹ-ಪ್ರಾಯೋಜಕರಾಗಿರಲು ಮುಂದೆ ಬಂದಿದ್ದು, ಎರಡು ದಿನಗಳ ಈ ವಿಚಾರಸಂಕಿರಣಕ್ಕೆ ತಮ್ಮ ಕಾಲೇಜಿನ ಆಡಿಟೋರಿಯಂ ಅನ್ನು, ಹಾಗೂ ದೃಶ್ಯ, ಶ್ರವಣ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ.
ಇದೀಗ ವಿವಿಧ ಸಮಿತಿಗಳಲ್ಲಿ ಆಗಿರುವ ಕಾರ್ಯಗಳ ಅವಲೋಕನ ಮಾಡುವ ಹಾಗೂ ಮುಂದಿನ ಕೆಲಸಗಳನ್ನು ಯೋಜಿಸುವ ಉದ್ದೇಶದಿಂದ, ಈ ವಿಚಾರಸಂಕಿರಣದ ಆಯೋಜಿಸುವಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಾಗೂ ತೊಡಗಿಸಿಕೊಳ್ಳಲು ಇಚ್ಛಿಸುವವರ, ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ ನಡೆಸಲಾಗುತ್ತಿದೆ. ಸಭೆಯ ವಿವರಗಳು ಕೆಳಕಂಡಂತಿವೆ.
ಸಮಯ: ಸಂಜೆ 5.30 ಕ್ಕೆ
ದಿನಾಂಕ: 23.12.2006 ಶನಿವಾರದಂದು
ಸ್ಥಳ: ಕ್ರೈಸ್ಟ್ ಕಾಲೇಜು ಆವರಣ,
ಬೆಂಗಳೂರು ಡೈರಿ ಎದುರು, ಹೊಸೂರು ರಸ್ತೆ,
ಬೆಂಗಳೂರು - 29
ಗಮನಿಸಿ: ವಿವಿಧ ಭೌಗೋಳಿಕ ನೆಲೆಗಳಲ್ಲಿರುವ ಕನ್ನಡಸಾಹಿತ್ಯ.ಕಾಂ ಬೆಂಬಲಿಗರಿಗೂ ಹಾಗೂ ಆಸಕ್ತರಿಗೂ ಈ ಸಭೆಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡುವ ಪ್ರಯತ್ನವಾಗಿ, ಅಂತರ್ಜಾಲದ ಹಾಗೂ ವೆಬ್ಕ್ಯಾಮ್ ಬಳಸಿ ಕಾನ್ಫರೆನ್ಸಿಂಗ್ ನಡೆಸಲಾಗುತ್ತಿದೆ.
ಯಾಹೂ ಮೆಸಂಜರಿನಲ್ಲಿರುವ, ಧ್ವನಿ ಹಾಗೂ ದೃಶ್ಯ ಬಿತ್ತರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು. ಆಸಕ್ತರು, ಭಾಗವಹಿಸುವ ಉದ್ದೇಶವುಳ್ಳವರು ದಯಮಾಡಿ, ತಮ್ಮ ಮೆಸಂಜರಿನ ಸ್ನೇಹಿತರ ಪಟ್ಟಿಗೆ shekarpoorna@ yahoo.com ಐಡಿಯನ್ನು ಸೇರಿಸಿಕೊಂಡು, ಶನಿವಾರದ ದಿನ ಸಭೆಯ ವೇಳೆ, ಭಾರತೀಯ ಕಾಲಮಾನ ೫.೦೦ ಕ್ಕೆ ತಮ್ಮ ಮೆಸಂಜರಿಗೆ ಲಾಗಿನ್ ಆಗಿ ಕಾನ್ಫರೆನ್ಸಿಂಗ್ನಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಅಲ್ಲದೆ, ಸದಸ್ಯರ ಬಳಿ ವೆಬ್ಕ್ಯಾಮ್ , ಮೈಕ್, ಹೆಡ್ಫೋನುಗಳ ಸೌಲಭ್ಯವಿದ್ದರೆ, ಅವುಗಳನ್ನು ಈ ಸಭೆಯಲ್ಲಿ ಬಳಸಿಕೊಳ್ಳಬೇಕಾಗಿ ಕೋರಿಕೆ..
ಈ ಪ್ರಯತ್ನವು, ತಾಂತ್ರಿಕವಾಗಿ ಲಭ್ಯವಿರುವ ಸೌಲಭ್ಯಗಳನ್ನೆಲ್ಲ ಅರ್ಥಪೂರ್ಣವಾಗಿ ಬಳಸಿಕೊಂಡು, ಕಸಾಕಾಂ ಸಮುದಾಯದಲ್ಲಿ ಹೆಚ್ಚಿನ ಸಂವಹನಕ್ಕೆ ಎಡೆಮಾಡಿಕೊಡುವ ಸಣ್ಣ ಪ್ರಯೋಗವಾಗಿದ್ದು, ಇದನ್ನು ಯಶಸ್ವಿಯಾಗಿಸುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.
ಈ ವಿಚಾರಸಂಕಿರಣವು ನಿಂತನೀರಾಗಿರುವ ಚಿಂತನಾ ಕ್ಷೇತ್ರವನ್ನು, ಹಾಗೂ ತಾಂತ್ರಿಕ ಕ್ಷೇತ್ರವನ್ನು ಪರಸ್ಪರ ಮುಖಾಮುಖಿಯಾಗಿಸಿ, ಆ ಮೂಲಕ ತಂತ್ರಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಜನೋಪಯೋಗಿಯಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಹೊಸ ಆಲೋಚನೆ, ಚಿಂತನೆಗಳಿಗೆ ದಿಕ್ಸೂಚಿಯಾಗಲಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ದೇಶದಲ್ಲಿ ಹೊಸ ಆರ್ಥಿಕ ಉತ್ಕ್ರಾಂತಿಗೆ ಕಾರಣವಾದ, ಬೆಂಗಳೂರು, ಕರ್ನಾಟಕ ಹಾಗೂ ಕನ್ನಡಿಗರು ಇಂತಹ ವಿಶಿಷ್ಟ ಪ್ರಯೋಗಮಾಡಹೊರಟಿರುವುದು, ಕನ್ನಡಿಗರೆಂಬ ನಮ್ಮ ಅಭಿಮಾನಕ್ಕೆ ಮತ್ತೊಂದು ಗರಿ.
ಈ ಪ್ರಯೋಗದಲ್ಲಿ ಭಾಗಿಯಾಗಲು, ಆಸಕ್ತರಾದ, ಇಂತಹ ಕಾರ್ಯವೊಂದರಲ್ಲಿ ಭಾಗವಹಿಸಿ, ನಮ್ಮ ಸಮಾಜಕ್ಕೆ ಹೆಚ್ಚು ಹತ್ತಿರವಾಗುವ, ಮುಕ್ತ ಮನಸ್ಸಿನ ಎಲ್ಲರಿಗೂ ತೆರೆದ ಬಾಗಿಲಿನ ಸ್ವಾಗತ..
ಕ್ರೈಸ್ಟ್ ಕಾಲೇಜಿನ ಆವರಣದಲ್ಲಿ ಭೇಟಿಯಾಗೋಣ..
ಶೇಖರ್ ಪೂರ್ಣ
ksctanda@gmail. com
ಮೊಬೈಲ್: 9321430015
ಮನೆ: ೦೮೦ ೨೬೪೮೪೬೧೭
12.04.2006
ಕನ್ನಡಸಾಹಿತ್ಯಡಾಟ್ಕಾಂ ಮನವಿ: ವಿವಿಧ ಕ್ಷೇತ್ರಗಳಲ್ಲಿ ಸಂಚಲನ
ಕನ್ನಡಸಾಹಿತ್ಯಡಾಟ್ಕಾಂ ಸಲ್ಲಿಸಲಿರುವ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ.
ಈ ವಾರ ಬೆಂಬಲ ಸೂಚಿಸಿದ ಗಣ್ಯರ ಹೆಸರುಗಳು ಇಂತಿವೆ:
೧.ಯು.ಆರ್.ಅನಂತಮೂರ್ತಿಯವರು,ಚಿಂತಕರು,ಜ್ಞಾನಪೀಠ ಪ್ರಶಸ್ತಿ ವಿಜೇತರು
೨.ಟಿ.ಎನ್.ಸೀತಾರಾಂ,ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
೩.ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
೪.ಸಿ ಆರ್ ಸಿಂಹ,
೫.ಜಯಂತ್ ಕಾಯ್ಕಿಣಿ, ಕಥೆಗಾರರು
೬.ಚಿರಂಜೀವಿ ಸಿಂಗ್ IAS,ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
೭.ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು,ಎನ್ಎಂಕೆಆರ್ವಿ ಕಾಲೇಜು
೮.ಎ ಎನ್ ಪ್ರಸನ್ನ, ರಂಗಕರ್ಮಿಗಳು
೯.ಸರ್ವಮಂಗಳ, ಅನುವಾದಕಿ
೧೦.ನಾಗರಾಜ ವಸ್ತಾರೆ,ಬರಹಗಾರರು
೧೧.ರಘುನಂದನ,ರಂಗ ನಿರ್ದೇಶಕರು
೧೨.ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
೧೩.ವಿಜಯ್ ಭಾರಧ್ವಾಜ್ ,ಕ್ರಿಕೆಟ್ ತಾರೆ
೧೪.ವಸುಧೇಂದ್ರ, ಬರಹಗಾರರು,'ಛಂದ' ಪುಸ್ತಕ ಪ್ರಕಾಶನ
೧೫.ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
೧೬.ಪವಿತ್ರ ಲೋಕೇಶ್,ಹಿರಿ-ಕಿರು ತೆರೆ ಕಲಾವಿದೆ
೧೭.ರೇಖಾ ದಾಸ್, ಹಿರಿ-ಕಿರು ತೆರೆ ಕಲಾವಿದೆ
೧೮.ಕೆ ಎಸ್ ಎಲ್ ಸ್ವಾಮಿ(ರವೀ),ಚಲನಚಿತ್ರ ನಿರ್ದೇಶಕರು
೧೯.ಕುಲಶೇಖರಿ, ಬರಹಗಾ(ರ)ರ್ತಿ
೨೦.ಎಸ್ ಶೆಟ್ಟರ್, ಇತಿಹಾಸಕಾರರು
೨೧.ಪದ್ಮರಾಜ ದಂಡಾವತೆ,ಸಹ ಸಂಪಾದಕರು, ಪ್ರಜಾವಾಣಿ
೨೨.ಕೆ ಸುಚೇಂದ್ರ ಪ್ರಸಾದ್, ಕಿರು-ಹಿರಿ ತೆರೆ ಕಲಾವಿದರು
೨೩.ಮಾನಸ ನಯನ, ಸಂಗೀತಗಾರರು
೨೪.ಗಣೇಶ್, ರಂಗತಜ್ಞರು
೨೫. ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್ಕನ್ನಡಡಾಟ್ಕಾಂ
೨೬.ಸಚ್ಛಿದಾನಂದ ಹೆಗ್ಗಡೆ ಬರಹಗಾರರು
೨೭.ಕೆ ಆರ್ ಚಂದ್ರಶೇಖರ್, ಹಿರಿಯ ವ್ಯವಸ್ಥಾಪಕರು, ಐ ಟಿ ಸಂಸ್ಥೆ('ನೂರೆಂಟು ಸುಳ್ಳು'-ಬ್ಲಾಗಕರ್ತರು)
ಜನಪ್ರಿಯ ಲೇಖನಗಳು
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
( ಸ್ನೇಹಿತರೆ, ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರು...
-
ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು. ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ, ಹೊತ್ತಗೆ ಸುಟ್ಟುಹೋದ ಕಮಟು ಪರಿಮಳವೋ ಅರಿಯದೆ ಮನ, ಮಲಿನ ಖೋಡಿ . ಕಸದ ಹೊಳೆಯಲಿ ಹಾಯಿದ...
-
ಎಸ್.ಕೆ.ಕರೀಂಖಾನರಿಗೊಂದು ನುಡಿನಮನ..... ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀ...
-
Kannadasaahithya.com supporter’s group No.1855, 6th A Main, 2nd Stage,D Block, Rajajinagar, Bangalore-10 kannadasaahithya@yahoogroups.com ph...
-
ಬರಹ: ಕಿರಣ್ ಎಂ ನಿರ್ವಾಹಕರು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆ...