7.29.2006
ಅಪರೂಪದ ಜಾನಪದ ಗಾರುಡಿಗ ಎಸ್.ಕೆ.ಕರೀಂಖಾನ್ ರವರು ಇನ್ನಿಲ್ಲ...
ಎಸ್.ಕೆ.ಕರೀಂಖಾನರಿಗೊಂದು ನುಡಿನಮನ.....
ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀವ ಜೈನ್ ಆಸ್ಪತ್ರೆಯ ಹಾಸಿಗೆ ಮೇಲೆ ಎಷ್ಟು ನರಳಿತೋ...? ಕನ್ನಡ ಮನೆ ಮಾತಲ್ಲದಿದ್ದರೂ, ಅವರು ಕನ್ನಡ ಜಾನಪದ ಕಲೆಯನ್ನು ಉಸಿರಾಗಿಸಿಕೊಂಡ ರೀತಿ ಅನನ್ಯ ಮತ್ತು ಅಪರೂಪ. ಕೊನೆಯ ದಿನಗಳಲ್ಲೂ ಸರ್ಕಾರಗಳು ಅವರಿಗೊಂದು ಸೂರು ಮಾಡಿಕೊಡಲಿಲ್ಲ. ಅವರನ್ನು ಸಂಬಂಧಿಕರ ಹಂಗಿನಲ್ಲೇ ಕೊನೆಯುಸಿರೆಳೆಯುವಂತೆ ಮಾಡಿಬಿಟ್ಟವು. ಹಿರಿಯ ಜೀವಕ್ಕೆ ನಮ್ಮೆಲ್ಲರ ಮನಸಾರ ನುಡಿ ನಮನಗಳಿರಲಿ.
ಸುಮಾರು ನಾಲ್ಕು ವರ್ಷಗಳ ಹಿಂದೆ ಕನ್ನಡ ಭವನದಲ್ಲಿ ಮನೆಯಂಗಳದ ಮಾತುಕಥೆಗೆ ಬಂದಿದ್ದ ಕರೀಂ ಖಾನರು ನನಗಗೊಂದು ಸೈಟೋ ಏನಾದರೂ ಕೊಡಿಸಿ...ಎಂದು ಪ್ರೇಕ್ಷಕರ ಮುಂದೆ ಅಕ್ಷ್ರರಶಃ ಬೇಡಿಕೊಂಡಿದ್ದರು. ಕೊನೆಯ ದಿನಗಳಲ್ಲೂ ಕನ್ನಡಿಗರು ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಲಿಲ್ಲ..
ಭಗವದ್ಗೀತೆಯನ್ನೊಳಗೊಂಡು ಅನೇಕಾನೇಕ ಕಾವ್ಯಗಳ ಬಗ್ಗೆ ಪಾಂಡಿತ್ಯ ಗಳಿಸಿದ್ದ ಕರೀಂಖಾನರು...ಹಿಂದೂ ದೇವರುಗಳ ಮೇಲೆ ಭಕ್ತಿಗೀತೆಗಳನ್ನು
ರಚಿಸಿ....ಭಕ್ತರು ನಾಚುವಂತೆ ಮಾಡಿದರು....
ಮುಸ್ಲಿಮರಲ್ಲಿ ಮುಸ್ಲಿಮರಾಗದೆ...ಹಿಂದುಗಳಲ್ಲಿ ಹಿಂದೂವಾಗದೆ...ಮನೆಯನೆಂದೂ ಕಟ್ಟಿಕೊಳ್ಳದೆ...ವಿಶ್ವಮಾನವರಾಗಿ ಅನಂತ ಚೇತನವಾಗುಳಿದ
ಕರೀಂ ಖಾನರಿಗೆ ಕರೀಂಖಾನರೇ ಸಾಟಿ....
ಮತ್ತೊಮ್ಮೆ ಹುಟ್ಟಿ ಬನ್ನಿ...ಜಾನಪದ ಕೊನೆಯಾಗುವಷ್ಟರಲ್ಲಿ....!!!
*******************
ಜನಪ್ರಿಯ ಲೇಖನಗಳು
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
( ಸ್ನೇಹಿತರೆ, ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರು...
-
ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು. ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ, ಹೊತ್ತಗೆ ಸುಟ್ಟುಹೋದ ಕಮಟು ಪರಿಮಳವೋ ಅರಿಯದೆ ಮನ, ಮಲಿನ ಖೋಡಿ . ಕಸದ ಹೊಳೆಯಲಿ ಹಾಯಿದ...
-
ಎಸ್.ಕೆ.ಕರೀಂಖಾನರಿಗೊಂದು ನುಡಿನಮನ..... ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀ...
-
Kannadasaahithya.com supporter’s group No.1855, 6th A Main, 2nd Stage,D Block, Rajajinagar, Bangalore-10 kannadasaahithya@yahoogroups.com ph...
-
ಬರಹ: ಕಿರಣ್ ಎಂ ನಿರ್ವಾಹಕರು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆ...
No comments:
Post a Comment